ಭೂಮಿ ಹುಣ್ಣಿಮೆ ಹಬ್ಬ ಮಲೆನಾಡಿನ ರೈತರಿಗೆ ಒಂದು ವಿಶೇಷವಾದ ಹಬ್ಬ. ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಬರುವ ಸೀಗೆ ಹುಣ್ಣಿಮೆಯಂದು ರೈತರು ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ. ಅಂದು ದೇಶದೆಲ್ಲೆಡೆ ವಾಲ್ಮೀಕಿ ಜಯಂತಿಯನ್ನೂ ಆಚರಿಸಲಾಗುತ್ತದೆ ಆದರೆ ಮಲೆನಾಡು ಭಾಗದ ರೈತರಿಗೆ ಆ ದಿನ ಭೂತಾಯಿಯ ಸೀಮಂತದ ದಿನ. ಸಾಮಾನ್ಯವಾಗಿ ಜೇಷ್ಠ-ಆಷಾಡದಲ್ಲಿ ನಾಟಿ ಮಾಡಿದ ಬತ್ತದ ಪೈರು ಹಾಗೂ ಇನ್ನಿತರ ಬೆಳೆಗಳು ಈ ಸಂದರ್ಭದಲ್ಲಿ ಕಾಳುಗಟ್ಟಿರುತ್ತವೆ. ಈ ಅವಧಿಯಲ್ಲಿ ತುಂಬು ಗರ್ಭಿಣಿಯರಿಗೆ ಸೀಮಂತ ಮಾಡುವಂತೆ, ಒಡಲೊಳಗೆ ಫಸಲಿನ ಗರ್ಭ ಹೊತ್ತ ಪೈರಿಗೂ ರೈತರು ಈ ಹಬ್ಬದಂದು ಸೀಮಂತ ಮಾಡುತ್ತಾರೆ. ವಿಜಯದಶಮಿ, ಆಯುಧ ಪೂಜೆಯ ಆಚರಣೆ ಮುಗಿಯುತ್ತಿದ್ದಂತೆಯೇ ಭೂಮಣ್ಣಿ ಹಬ್ಬದ ತಯಾರಿ ಶುರುವಾಗುತ್ತದೆ. ಹಬ್ಬದ ಪ್ರಮುಖ ಆಕರ್ಷಣೆಯಾದ ಭೂಮಣ್ಣಿ ಬುಟ್ಟಿಗೆ ಹಸೆ ಚಿತ್ತಾರ ಬರೆಯಲು ಹೆಂಗಸರು ಅಣಿಯಾಗುತ್ತಾರೆ.
ಭೂಮಣ್ಣಿ ಬುಟ್ಟಿ ಎಂಬುದು ಬಿದಿರಿನಿಂದ ತಯಾರಿಸಲಾದ ಒಂದು ಸಾಮಾನ್ಯ ಬುಟ್ಟಿ.ಈ ಬುಟ್ಟಿಗೆ ಹಲವು ಬಾರಿ ಗೋಮಯದಿಂದ ಸಾರಿಸಿ, ನಂತರ ಕೆಮ್ಮಣ್ಣು ಬಳಿದು ರೈತ ಮಹಿಳೆಯರು ತಮಗೆ ಪರಂಪರಾಗತವಾಗಿ ಬಂದ ಹಸೆ ಕಲೆಯ ಚಿತ್ತಾರದಿಂದ ಶೃಂಗರಿಸುತ್ತಾರೆ. ಯಾವುದೇ ರೀತಿಯ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸದೆ, ಆದುನಿಕ ಬ್ರಷ್ ಗಳನ್ನು ಬಳಸದೆ, ಕೇವಲ ನುಣ್ಣಗೆ ರುಬ್ಬಿದ ಅಕ್ಕಿ ಹಿಟ್ಟು ಮತ್ತು ಪುಂಡಿ ನಾರಿನ ಕುಂಚದಿಂದಲೇ ಬುಟ್ಟಿಯ ಮೈತುಂಬಾ ಅಂದದ ಹಸೆ ಚಿತ್ತಾರಗಳನ್ನು ಅರಳಿಸುತ್ತಾರೆ. ಹಸೆಯ ಚಿತ್ತಾರದಲ್ಲೂ ಅವರ ದೈನಂದಿನ ಕಸುಬಾದ ಕೃಷಿ ಚಟುವಟಿಕೆಗಳ ಚಿತ್ರಣವೇ ರೂಪತಳೆಯುತ್ತದೆ. ಊಳುವುದು, ಬಿತ್ತುವುದು, ಬಣವೆ ಹಾಕುವುದು, ಒಕ್ಕುವುದು ಮೊದಲಾದ ಕೃಷಿ ಚಟುವಟಿಕೆಗಳೊಂದಿಗೆ ಕಸುಬಿಕೆ ಪೂರಕವಾದ ಗಿಡ, ಮರ, ಬಳ್ಳಿ, ಪಶು, ಪಕ್ಷಿ ಮೊದಲಾದ ಪರಿಸರದ ಚಿತ್ರಗಳೂ ಭೂಮಣ್ಣಿ ಬುಟ್ಟಿಯನ್ನು ಅಲಂಕರಿಸುತ್ತವೆSaturday, 13 October 2018
boomi hunnime
ಭೂಮಿ ಹುಣ್ಣಿಮೆ ಹಬ್ಬ ಮಲೆನಾಡಿನ ರೈತರಿಗೆ ಒಂದು ವಿಶೇಷವಾದ ಹಬ್ಬ. ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಬರುವ ಸೀಗೆ ಹುಣ್ಣಿಮೆಯಂದು ರೈತರು ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ. ಅಂದು ದೇಶದೆಲ್ಲೆಡೆ ವಾಲ್ಮೀಕಿ ಜಯಂತಿಯನ್ನೂ ಆಚರಿಸಲಾಗುತ್ತದೆ ಆದರೆ ಮಲೆನಾಡು ಭಾಗದ ರೈತರಿಗೆ ಆ ದಿನ ಭೂತಾಯಿಯ ಸೀಮಂತದ ದಿನ. ಸಾಮಾನ್ಯವಾಗಿ ಜೇಷ್ಠ-ಆಷಾಡದಲ್ಲಿ ನಾಟಿ ಮಾಡಿದ ಬತ್ತದ ಪೈರು ಹಾಗೂ ಇನ್ನಿತರ ಬೆಳೆಗಳು ಈ ಸಂದರ್ಭದಲ್ಲಿ ಕಾಳುಗಟ್ಟಿರುತ್ತವೆ. ಈ ಅವಧಿಯಲ್ಲಿ ತುಂಬು ಗರ್ಭಿಣಿಯರಿಗೆ ಸೀಮಂತ ಮಾಡುವಂತೆ, ಒಡಲೊಳಗೆ ಫಸಲಿನ ಗರ್ಭ ಹೊತ್ತ ಪೈರಿಗೂ ರೈತರು ಈ ಹಬ್ಬದಂದು ಸೀಮಂತ ಮಾಡುತ್ತಾರೆ. ವಿಜಯದಶಮಿ, ಆಯುಧ ಪೂಜೆಯ ಆಚರಣೆ ಮುಗಿಯುತ್ತಿದ್ದಂತೆಯೇ ಭೂಮಣ್ಣಿ ಹಬ್ಬದ ತಯಾರಿ ಶುರುವಾಗುತ್ತದೆ. ಹಬ್ಬದ ಪ್ರಮುಖ ಆಕರ್ಷಣೆಯಾದ ಭೂಮಣ್ಣಿ ಬುಟ್ಟಿಗೆ ಹಸೆ ಚಿತ್ತಾರ ಬರೆಯಲು ಹೆಂಗಸರು ಅಣಿಯಾಗುತ್ತಾರೆ.
ಭೂಮಣ್ಣಿ ಬುಟ್ಟಿ ಎಂಬುದು ಬಿದಿರಿನಿಂದ ತಯಾರಿಸಲಾದ ಒಂದು ಸಾಮಾನ್ಯ ಬುಟ್ಟಿ.ಈ ಬುಟ್ಟಿಗೆ ಹಲವು ಬಾರಿ ಗೋಮಯದಿಂದ ಸಾರಿಸಿ, ನಂತರ ಕೆಮ್ಮಣ್ಣು ಬಳಿದು ರೈತ ಮಹಿಳೆಯರು ತಮಗೆ ಪರಂಪರಾಗತವಾಗಿ ಬಂದ ಹಸೆ ಕಲೆಯ ಚಿತ್ತಾರದಿಂದ ಶೃಂಗರಿಸುತ್ತಾರೆ. ಯಾವುದೇ ರೀತಿಯ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸದೆ, ಆದುನಿಕ ಬ್ರಷ್ ಗಳನ್ನು ಬಳಸದೆ, ಕೇವಲ ನುಣ್ಣಗೆ ರುಬ್ಬಿದ ಅಕ್ಕಿ ಹಿಟ್ಟು ಮತ್ತು ಪುಂಡಿ ನಾರಿನ ಕುಂಚದಿಂದಲೇ ಬುಟ್ಟಿಯ ಮೈತುಂಬಾ ಅಂದದ ಹಸೆ ಚಿತ್ತಾರಗಳನ್ನು ಅರಳಿಸುತ್ತಾರೆ. ಹಸೆಯ ಚಿತ್ತಾರದಲ್ಲೂ ಅವರ ದೈನಂದಿನ ಕಸುಬಾದ ಕೃಷಿ ಚಟುವಟಿಕೆಗಳ ಚಿತ್ರಣವೇ ರೂಪತಳೆಯುತ್ತದೆ. ಊಳುವುದು, ಬಿತ್ತುವುದು, ಬಣವೆ ಹಾಕುವುದು, ಒಕ್ಕುವುದು ಮೊದಲಾದ ಕೃಷಿ ಚಟುವಟಿಕೆಗಳೊಂದಿಗೆ ಕಸುಬಿಕೆ ಪೂರಕವಾದ ಗಿಡ, ಮರ, ಬಳ್ಳಿ, ಪಶು, ಪಕ್ಷಿ ಮೊದಲಾದ ಪರಿಸರದ ಚಿತ್ರಗಳೂ ಭೂಮಣ್ಣಿ ಬುಟ್ಟಿಯನ್ನು ಅಲಂಕರಿಸುತ್ತವೆ
Subscribe to:
Post Comments (Atom)
No comments:
Post a Comment